ಎತ್ತೆತ್ತ ಹರಿಯುತಿದೆ

ಎತ್ತೆತ್ತ ಹರಿಯುತಿದೆ
ಸೆಲೆಯು ಬದುಕು
ಬರಿದಾದ ಯಾನ ||

ಚಿತ್ತ ಕಳೆದು
ಭಾಗಿಸಿತು ಕಡಲ
ಕಲರವ ಮೌನ ||

ಬಣ್ಣ ಚಿತ್ತಾರ
ವಿಲ್ಲದ ಬಾಳಿನಗಲ
ಬವಣೆ ಪಯಣದಲಿ ||

ಬಡವನಂಗಳದಲಿ
ಸಿರಿತನದ ಬೆಳಕು
ಬೆಸೆದ ಭೂಮಿಕೆಯಲಿ ||

ಗಗನ ತುಂಬೆಲ್ಲಾ
ಸ್ವಚ್ಚಂದ ಹಾರಾಡುವ
ಹಕ್ಕಿಯ ಚೈತನ್ಯ ||

ಹಕ್ಕಿಯಂತಯೆ
ಬದುಕು ಮೃದುಮನ
ಬಂಡಾಯವೆದ್ದ ಗೀಳು ||

ಸಾವಿರದ ದೂರ
ಹಾದಿಯ ಕನಸು
ಕಟ್ಟುವ ಮಹಾಪುರ ||

ನಿನ್ನ ಬದುಕಿದು
ನಿಲ್ಲದು ಸಾಗರದಾ
ಹರಿಗೋಲ ಯಾನ ||

ಎಚ್ಚೆತ್ತ ದನಿಯು
ನಿನ್ನದು ದಡವ ಸೇರಿ
ಹಾಡ ಹಾಡು
ಮನಸಾರೆ ಹಾಡು !!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾನಪದದಲ್ಲಿ ಮಾನವೀಯ ಮೌಲ್ಯಗಳು
Next post ಅನಂತ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys